ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರತದಲ್ಲಿ ನಿರುದ್ಯೋಗ (Unemployment) ಹೆಚ್ಚಳಕ್ಕೆ ಪದವೀಧರರ (Graduate) ಸಂಖ್ಯೆಯಲ್ಲಿನ ಹೆಚ್ಚಳವೇ ಕಾರಣವೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು.
READ | ಶಿವಮೊಗ್ಗದಲ್ಲಿ ಸಂಚರಿಸಲಿದೆ ವಿಶಿಷ್ಟ ಬಸ್, ಎಲ್ಲೆಲ್ಲಿ ಓಡಾಟ, ಏನಿದರ ಮಹತ್ವ?
ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಿರುದ್ಯೋಗ ಹೆಚ್ಚಳವಾಗಲು ಹೆಚ್ಚಿನ ಶಿಕ್ಷಣ ಪಡೆಯುತ್ತಿರುವುದು ಕಾರಣ. ವರ್ಷದಿಂದ ವರ್ಷಕ್ಕೆ ಪದವಿ ಪಡೆಯುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಒಂದು ಕಾಲದಲ್ಲಿ ಪದವಿ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಇತ್ತು ಎಂದು ತಿಳಿಸಿದರು.
ಈ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ನೀಡಿ. ಈ ಹಿಂದೆ ಪೂರ್ಣ ಸಿಗದಿದ್ದಕ್ಕೆ ಕಾಂಗ್ರೆಸ್- ಜೆಡಿಎಸ್ ಸೇರಿ ಸರ್ಕಾರ ರಚಿಸಿದ್ದರು. ಕಾಂಗ್ರೆಸ್ ಶಾಸಕರು ತಿರುಗಿಬಿದ್ದಿದ್ದಕ್ಕೆ ಸರ್ಕಾರ ರಚನೆಯ ಹೊಣೆಗಾರಿಕೆ ಬಿಜೆಪಿಯದ್ದಾಗಿತ್ತು. ಡಬಲ್ ಇಂಜಿನ್ ಸರ್ಕಾರ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾವಂತರಿಗೆ ಉದ್ಯೋಗ ಸಿಗಬೇಕೆಂಬ ಕಾರಣಕ್ಕೆ ಸ್ವಯಂ ಉದ್ಯೋಗಕ್ಕೆ ಒತ್ತು ನೀಡುತ್ತಿದ್ದಾರೆ. 10 ಸಾವಿರಕ್ಕೂ ಅಧಿಕ ಸ್ಟಾರ್ಟ್ ಅಪ್ಗಳು ಪ್ರಾರಂಭವಾಗಿವೆ ಎಂದರು.
ಭಾರತ 4 ವಿಚಾರಗಳಲ್ಲಿ ಆತ್ಮನಿರ್ಭರವಾಗಬೇಕಿದೆ
ದೇಶದಲ್ಲಿನ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ನಾಲ್ಕು ವಿಚಾರದಲ್ಲಿ ಆತ್ಮನಿರ್ಭರ ಆಗಬೇಕಾಗಿದೆ. ರಸಗೊಬ್ಬರ, ಖಾದ್ಯ ತೈಲ, ಪೆಟ್ರೋಲಿಯಂ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರ ಈ ವಿಚಾರಗಳಲ್ಲಿ ಆತ್ಮನಿರ್ಭರವಾಗಬೇಕಿದ್ದು, ಅದಕ್ಕಾಗಿ ನಾನಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ, ಕೆ.ಜಿ. ಕುಮಾರಸ್ವಾಮಿ, ಶಿವರಾಜ್, ಕೆ.ವಿ.ಅಣ್ಣಪ್ಪ, ಶ್ರೀನಾಥ್, ಶರತ್ ಕಲ್ಯಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Mobile manufacture | ಭಾರತದಲ್ಲೇ ತಯಾರಾಗಲಿವೆ ಮೊಬೈಲ್, ‘ಆ್ಯಪಲ್’ ಉತ್ಪಾದನೆ ಈಗಾಗಲೇ ಆರಂಭ