ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ತೊಟ್ಟಿಲುಶಾಸ್ತ್ರಕ್ಕೆ ಹೊರಟಿದ್ದ ದಿಬ್ಬಣದ ಆಟೋಗೆ ಗುರುವಾರ ರಾತ್ರಿ ಬೊಲೆರೋ ಡಿಕ್ಕಿ ಹೊಡೆದಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಬಿದರಕೊಪ್ಪ ತಾಂಡದ ನಿವಾಸಿ ರಾಮ್ಜಿ ನಾಯ್ಕ (72) ಮೃತರು.
READ | ಮಲೆನಾಡಿನ 136 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ! ಶಿಕ್ಷಣ ಸಚಿವರು ನೀಡಿದ ಸೂಚನೆ ಏನು?
ಆಟೋ ಹಿಂಬದಿ ಗುದ್ದಿದ ಬೊಲೆರೋ
ಒಂದೇ ಕುಟುಂಬದವರು ಬಿದರಕೊಪ್ಪ ತಾಂಡದಿಂದ ಎಳನೀರುಕೊಪ್ಪ ಗ್ರಾಮದಲ್ಲಿ ನಡೆಯುತ್ತಿದ್ದ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಆಗ ಜಕ್ಕನಹಳ್ಳಿ ಸಮೀಪ ಹಂಪ್ ರಸ್ತೆಯಲ್ಲಿ ಹಂಪ್ಸ್ ಇದ್ದುದ್ದರಿಂದ ಚಾಲನೆ ವೇಗವನ್ನು ತಗ್ಗಿಸಿದ್ದಾನೆ. ಏಕಾಏಕಿ ಹಿಂದಿನಿಂದ ಬಂದ ಬೊಲೆರೋ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.
ಶಿಕಾರಿಪುರದಲ್ಲಿ ಗಾಯಾಳುಗಳ ಚಿಕಿತ್ಸೆ
ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಗಾಯಾಳುಗಳನ್ನು ತಕ್ಷಣ ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಆಸ್ಪತ್ರೆಗೆ ಬಿ.ವೈ.ರಾಘವೇಂದ್ರ ಭೇಟಿ
ಶಿಕಾರಿಪುರದ ಆಸ್ಪತ್ರೆಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿ ನೀಡಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನೆಯ ಕಾರಣವನ್ನು ಕೇಳಿದರು. ವೈದ್ಯರಿಗೂ ಫೋನ್ ಮಾಡಿ ಸರಿಯಾಗಿ ಆರೈಕೆ ಮಾಡುವಂತೆ ಸೂಚನೆ ನೀಡಿದರು.