ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಣದುಬ್ಬರದಿಂದ ತತ್ತರಿಸಿರುವ ಜನಸಾಮಾನ್ಯರ ಆಶಾಕಿರಣ ‘ಗೃಹಜ್ಯೋತಿ’ ಯೋಜನೆ (Gruha Jyothi scheme). ಈ ಯೋಜನೆಯಡಿ ಪ್ರತಿ ಗೃಹ ಬಳಕೆದಾರರು ಗರಿಷ್ಠ 200 ಯುನಿಟ್ವರೆಗೆ ವಿದ್ಯುತ್ನ್ನು ಉಚಿತವಾಗಿ ಪಡೆಯಬಹುದಾಗಿದೆ.
READ | ಶಿವಮೊಗ್ಗದಿಂದ ಹೊರಡುವ ವಿಮಾನಗಳ ವೇಳಾಪಟ್ಟಿ, ಮೊದಲು ದಿನದ ಟೈಂ ಟೇಬಲ್ ಏನು?
ರಾಜ್ಯ ಸರ್ಕಾರದ ಐದು ಗ್ಯಾರಂಟಿ (congress 5 Guarantee schemes) ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯು ಬೆಲೆ ಏರಿಕೆಯಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ವರದಾನವಾಗಿದೆ. ಗೃಹಜ್ಯೋತಿ ಅನುಷ್ಠಾನದಲ್ಲಿ ಅತ್ಯಂತ ಸರಳ ಹಾಗೂ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ರಾಜ್ಯದ ಎಲ್ಲ ಗೃಹ ಬಳಕೆ ವಿದ್ಯುತ್ ಗ್ರಾಹಕರು ಈ ಯೋಜನೆಗೆ ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಕೆ ಚಾಲನೆಗೊಂಡ ದಿನದಿಂದ ಈವರೆಗೆ ಉತ್ತಮ ಸ್ಪಂದನೆ ದೊರತಿದೆ.
2 ಲಕ್ಷ ಗ್ರಾಹಕರಿಗೆ ಶೂನ್ಯ ಬಿಲ್
ಗೃಹಜ್ಯೋತಿ ಯೋಜನೆಗೆ ಶಿವಮೊಗ್ಗ ವೃತ್ತದ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಶೇ.80 ರಷ್ಟು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಆ.20ರ ರವರೆಗೆ ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 2,63,400 ಗ್ರಾಹಕರಿಗೆ ಗೃಹಜ್ಯೋತಿ ಬಿಲ್ಲುಗಳನ್ನು ವಿತರಿಸಲಾಗಿದೆ. ಒಟ್ಟು 2,05,992 ಗ್ರಾಹಕರಿಗೆ ಶೂನ್ಯ ಬಿಲ್ಲುಗಳನ್ನು ವಿತರಿಸಲಾಗಿದೆ. ಶೂನ್ಯ ಬಿಲ್ ಸಬ್ಸಿಡಿ ಮೊತ್ತ ₹5,39,54,539 ಆಗಿರುತ್ತದೆ. 57408 ಗ್ರಾಹಕರಿಗೆ ನೆಟ್ ಬಿಲ್ಗಳನ್ನು ನೀಡಲಾಗಿದ್ದು, ನೆಟ್ ಬಿಲ್ ಸಬ್ಸಿಡಿ ಮೊತ್ತ ₹2,59,21,565 ಆಗಿರುತ್ತದೆ.
– ನಾಮದೇವ.ಎನ್.ವಿ, ಉಪ ನಿಯಂತ್ರಣಾಧಿಕಾರಿ, ಶಿವಮೊಗ್ಗ ವೃತ್ತ, ಮೆಸ್ಕಾಂ
ಯಾರಿಗೆ ಯೋಜನೆಯ ಲಾಭ?
2022-23 ನೇ ಸಾಲಿನಲ್ಲಿ ಗೃಹ ವಿದ್ಯುತ್ ಬಳಕೆಯ ಸರಾಸರಿ ಹಾಗೂ ಹೆಚ್ಚುವರಿಯಾಗಿ ಶೇ.10 ರಷ್ಟು ಯುನಿಟ್ ಲೆಕ್ಕ ಹಾಕಿದಾಗ ಒಟ್ಟು ಬಳಕೆಯ ಸರಾಸರಿ 200 ಯುನಿಟ್ಗಿಂತ ಕಡಿಮೆ ಇದ್ದವರಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಈ ಯೋಜನೆಯು 2023 ರ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಅನ್ವಯವಾಗಿದ್ದು, 1 ನೇ ಆಗಸ್ಟ್ ಹಾಗೂ ನಂತರದ ಮಾಪಕ ಓದುವ ದಿನಾಂಕದಿಂದ ಅನುಷ್ಠಾನಗೊಂಡಿದೆ.
READ | ಹೊಸ ತಂತ್ರಜ್ಞಾನದಿಂದ ಮೊದಲ ದಿನವೇ ಟ್ರಾಫಿಕ್ ನಿಯಮ ಉಲ್ಲಂಘನೆಯ ಭರ್ಜರಿ ಕೇಸ್, ದಾಖಲಾದ ಕೇಸ್ ಗಳೆಷ್ಟು?
ಗೃಹಜ್ಯೋತಿ ನೋಂದಣಿ ಹೇಗೆ) (How to register for Gruha Jyothi)?
ಈ ಯೋಜನೆಯ ಅನುಷ್ಠಾನಕ್ಕೆ ಅತ್ಯಂತ ಸರಳ ಹಾಗೂ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪ್ರತಿ ಗೃಹ ಬಳಕೆದಾರು ಸೇವಾಸಿಂಧು ಪೋರ್ಟಲ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಗ್ರಾಮ ಒನ್(Grama One), ಕರ್ನಾಟಕ ಒನ್ (Karnataka One) ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ (Bangalore One), ಗ್ರಾ.ಪಂ (Grama Panchayat) ನಾಡ ಕಚೇರಿ (Nada kacheri) ಅಥವಾ ಎಲ್ಲಾ ವಿದ್ಯುತ್ (all escom offices) ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
ಗೃಹಜ್ಯೋತಿ ಯೋಜನೆ ನಿಜಕ್ಕೂ ನಮ್ಮ ಮನೆ ಬೆಳಗಿದೆ. ಬಡತನದ ಹಿನ್ನೆಲೆ ಕರೆಂಟ್ ಬಿಲ್ ಕಟ್ಟಲು ಬಹಳ ಕಷ್ಟವಾಗುತ್ತಿತ್ತು. ಈ ತಿಂಗಳು ಶೂನ್ಯ ಬಿಲ್ ಬಂದಿದ್ದು ನಿಟ್ಟುಸಿರು ಬಿಡುವಂತೆ ಆಗಿದೆ. ಸರ್ಕಾರಕ್ಕೆ ಧನ್ಯವಾದಗಳು. – ಧನಂಜಯಪ್ಪ, ಹೊಳಲೂರು
ಮಆರ್ಥಿಕವಾಗಿ ಹಿಂದುಳಿದಿರುವ ಮಧ್ಯಮ ವರ್ಗದ ನಮ್ಮಂತಹ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ವರದಾನವಾಗಿದೆ. ಕರೆಂಟ್ ಬಿಲ್ ಕಟ್ಟುವುದು ತಪ್ಪಿರುವುದರಿಂದ ಅದೇ ಮೊತ್ತವನ್ನು ಕುಟುಂಬ ನಿರ್ವಹಣೆ ಇತರೆ ಖರ್ಚಿಗೆ ಬಳಕೆ ಮಾಡಿಕೊಳ್ಳುತ್ತೇವೆ.
– ಮಂಜುಳ, ತ್ಯಾವರೆಚಟ್ನಹಳ್ಳಿ
ಸಲ್ಲಿಸಬೇಕಾದ ದಾಖಲೆಗಳು
ನೋಂದಣಿ ಸಂದರ್ಭದಲ್ಲಿ ಆಧಾರ್ ಸಂಖ್ಯೆ, ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ/ಬಾಡಿಗೆ/ಭೋಗ್ಯದ ಕರಾರು ಪತ್ರ(ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಅಥವಾ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸಬೇಕು.
ಯಾರಿಗೆಲ್ಲ ಯೋಜನೆಯ ಪ್ರಯೋಜನ?
- ಗೃಹ ವಿದ್ಯುತ್ ಬಳಕೆದಾರರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ವಾಣಿಜ್ಯ ಬಳಕೆದಾರರು ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಬಾಡಿಗೆದಾರು, ವಸತಿ ಸಮುಚ್ಚಯ(ಅಪಾರ್ಟ್ಮೆಂಟ್) ಮಾಲಿಕರು ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸಿದ್ದರೆ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ.
- ಯೋಜನೆಯ ಫಲಾನುಭವಿಯಾಗಿ ನಿಗದಿಪಡಿಸಿರುವ ವಿದ್ಯುತ್ಗಿಂತ ಹೆಚ್ಚುವರಿ ಯೂನಿಟ್ ವಿದ್ಯುತ್ ಬಳಸಿದರೆ, ಹೆಚ್ಚುವರಿ ಯೂನಿಟ್ ಗೆ ಬಿಲ್ಲನ್ನು ಪಾವತಿಸಬೇಕು.
- ಮಾಸಿಕ ಬಳಕೆಯು 200 ಯುನಿಟ್ಗಿಂತ ಹೆಚ್ಚಿದ್ದರೆ, ಆ ನಿರ್ದಿಷ್ಟ ತಿಂಗಳಿಗೆ ಸಂಪೂರ್ಣ ಬಿಲ್ಲನ್ನು ಪಾವತಿಸಬೇಕು. ಹೊಸ ಬಳಕೆದಾರರಿಗೆ ರಾಜ್ಯದ ವಿದ್ಯುತ್ ಬಳಕೆಯ ಸರಾಸರಿ ಯುನಿಟ್ ಆಧಾರವಾಗಿಟ್ಟುಕೊಂಡು ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು. ಒಂದು ವರ್ಷದ ಸರಾಸರಿ ಲಭ್ಯವಾದ ಬಳಿಕ ದತ್ತಾಂಶವನ್ನು ಆಧರಿಸಿ ಯುನಿಟ್ ನಿಗದಿಪಡಿಸಲಾಗುತ್ತದೆ.
ವಿಶೇಷ ಲೇಖನ: ಎಂ.ಟಿ.ಭಾಗ್ಯ, ವಾರ್ತಾ ಸಹಾಯಕರು
ವಾರ್ತಾ ಇಲಾಖೆ, ಶಿವಮೊಗ್ಗ
Smart Traffic | ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ, ಮನೆಗೆ ಬರಲಿದೆ ದಂಡದ ನೋಟಿಸ್, ಯಾವಾಗಿಂದ ಅನ್ವಯ?