ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಲ ವಸೂಲಾತಿಗಾಗಿ ಬ್ಯಾಂಕ್ ನವರು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಲ್ಲಿನ ಕೆನರಾ ಬ್ಯಾಂಕ್ ವೃತ್ತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
READ | ಸಾವಿರ ಜನರಿಗೆ ಉದ್ಯೋಗ ನೀಡಿದ ಶಿವಮೊಗ್ಗ ಉದ್ಯೋಗ ಮೇಳ, ಯುವನಿಧಿ ಜಾರಿ ಬಗ್ಗೆ ಸಚಿವ ಮಧು ಹೇಳಿದ್ದೇನು?
ತಾಲೂಕಿನ ಹೊಳೆಹಟ್ಟಿ ಗ್ರಾಮದ ಕುಪೇಂದ್ರಪ್ಪ ಹೊಳಲೂರು ಬ್ಯಾಂಕ್ ವೊಂದರಿಂದ ಬೆಳೆ ಸಾಲ ₹19,000 ಅಭಿವೃದ್ಧಿ ಸಾಲ ₹63,000, ಮನೆ ರಿಪೇರಿ ಸಾಲ ₹3 ಲಕ್ಷ, ಟ್ರಾಕ್ಟರ್ ಸಾಲ ₹5.10 ಲಕ್ಷ ಸೇರಿ ₹9,52,000 ಸಾಲ ಪಡೆದಿದ್ದಾರೆ. ಈಗಾಗಲೇ ₹4.50 ಲಕ್ಷ ಪಾವತಿ ಮಾಡಿದ್ದಾರೆ. ಉಳಿದ ₹5.02 ಲಕ್ಷ ಪಾವತಿ ಮಾಡಲು ಸಿದ್ಧವಿದ್ದಾರೆ. ಸಾಲಗಾರ ಕುಪೇಂದ್ರಪ್ಪ ಅನಾರೋಗ್ಯ ಪೀಡಿತರಾಗಿದ್ದು, ಅವರ ಪತ್ನಿ ರಾಜೇಶ್ವರಿ ಮೆದುಳಿನಲ್ಲಿ ರಕ್ತಸ್ರಾವ ಆಗಿ ಜ್ಞಾನ ಕಳೆದುಕೊಂಡಿದ್ದಾರೆ. ವಯೋವೃದ್ಧ ಅಜ್ಜಿ ಶಾಂತಮ್ಮ ಹಾಸಿಗೆ ಹಿಡಿದಿದ್ದಾರೆ. ಮೂರು ಜನರ ಚಿಕಿತ್ಸೆಗೆ ಜಮೀನು ಮಾರಾಟ ಮಾಡಿದ್ದಾರೆ ಎಂದು ವಿವರಿಸಿದರು.
ಮನೆ ಸ್ವಾಧೀನಕ್ಕೆ ನೋಟಿಸ್
ಈಗ ಬ್ಯಾಂಕ್ ನವರು ಮನೆ ಸ್ವಾಧೀನ ಪಡೆಯಲು ನೋಟಿಸ್ ಅಂಟಿಸಿದ್ದಾರೆ. ಸಾಲ ಮರು ಪಾವತಿಸಲು ಬ್ಯಾಂಕ್ ಗೆ ಹೋದಾಗ ₹1 ಕೋಟೆ ಆಗಿದೆ ಎಂದು ಹೇಳಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೂಡಲೇ ಬಾಕಿ ಹಣ ಕಟ್ಟಿಸಿಕೊಂಡು ಮುಕ್ತ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಜಿಲ್ಲಾಧ್ಯಕ್ಷ ಶಿವಮೂರ್ತಿ, ಈರಣ್ಣ ಅರಬಿಳಚಿ, ಹಿಟ್ಟೂರು ರಾಜು ಇದ್ದರು.