ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ವಿವಿಧೆಡೆಯಲ್ಲಿನ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ನೀಡುವ ಪ್ರಯತ್ನ ‘ಫಟಾಫಟ್ ನ್ಯೂಸ್’. ಸುದ್ದಿ ಕಣಜ.ಕಾಂ ಈ ಪ್ರಯತ್ನಕ್ಕೆ ಮುಂದಾಗಿದೆ. ಅರ್ಧ ನಿಮಿಷದಲ್ಲೇ ತಮಗೆ ಬೇಕಾದ ಸುದ್ದಿಗಳನ್ನು ಓದಿ ಕೊಳ್ಳಬಹುದು.
ನ್ಯೂಸ್ 1- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಅಹ್ವಾನ
SHIMOGA: ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸಾಗರ ತಾಲೂಕಿನ ಸೈದೂರು ಮತ್ತು ಚನ್ನಗೊಂಡ ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ತಹಶೀಲ್ದಾರ್ ಸಾಗರ ತಾಲೂಕು ಕಚೇರಿ/ ಉಪ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜನವರಿ 2ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನ್ಯೂಸ್ 2- ಕಾರ್ಮಿಕ ಭವಿಷ್ಯ ನಿಧಿ ಬಾಕಿ ವಸೂಲಾತಿ ಕ್ರಮ ಜಾರಿ
SHIMOGA: ನವದೆಹಲಿಯ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು ಡಿಸೆಂಬರ್ 2023 ರಿಂದ ಫೆಬ್ರವರಿ 2024ರವರೆಗೆ ವಿಶೇಷ ವಸೂಲಾತಿ ಅಭಿಯಾನವನ್ನು ಪ್ರಾರಂಭಿಸಿದೆ. ಇಪಿಎಫ್ ಮತ್ತು ಎಂಪಿ ಆಕ್ಟ್ 1952ರ ಸೆಕ್ಷನ್ 8ಬಿ ಯಿಂದ 8ಜಿ ಅಡಿಯಲ್ಲಿ ಮರುಪ್ರಾಪ್ತಿ ಪ್ರಕ್ರಿಯೆಗಳು ಪಿಎಫ್ ಮತ್ತು ಅಲೈಡ್ ಬಾಕಿಗಳ ವಸೂಲಾತಿಗಾಗಿ ಪ್ರಾದೇಶಿಕ ಕಚೇರಿಯಿಂದ ಟಾಪ್ 5 ಸಂಸ್ಥೆಗಳ ವಿರುದ್ಧ ಕ್ರಮ ಜಾರಿಗೊಳಿಸಿದೆ.
ಹರಪ್ಪನಹಳ್ಳಿಯ ಮೆ|| ಕತ್ರ ಫೈಟೋಕೆಮ್ ಪ್ರೈ.ಲಿ., ಹರಿಹರದ ಮೆ|| ಸೋನಲ್ಕರ್ ಟೂಲ್ ವಕ್ರ್ಸ್ ಪ್ರೈ. ಲಿ., ಶಿವಮೊಗ್ಗದ ಬಿ. ಬಸವರಾಜ್, ಕಂಟ್ರಾಕ್ಟರ್, ಮೆ|| ವೆರ್ಟೇರಾ ಡಿನ್ನರ್ವೇರ್ ಪ್ರೈ.ಲಿ., ಹಾಗೂ ಶ್ರೀ ಗುರು ರಾಘವೇಂದ್ರ ಎಂಟರ್ಪ್ರೈಸಸ್, ಸಂತೆಕಡೂರು ಈ ಸಂಸ್ಥೆಗಳ ಉದ್ಯೋಗದಾತರ/ ನಿರ್ದೇಶಕರ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಿದ್ದರೆ ಅದನ್ನು ro.shivamogga@epfindia.gov.in ನಲ್ಲಿ ಹಂಚಿಕೊಳ್ಳಬಹುದಾಗಿದೆ. ಬಲವಂತದ ಕ್ರಮಗಳನ್ನು ತಪ್ಪಿಸಲು, ಉದ್ಯೋಗದಾತರು ಪಿಎಫ್ ವಂತಿಕೆಗಳನ್ನು ನಿಗದಿತ ಅವಧಿಯಲ್ಲಿ ಮತ್ತು ಆದೇಶ ನೀಡಿದ 60 ದಿನಗಳಲ್ಲಿ ಎಲ್ಲ ಪಿಎಫ್ ಸಂಬಂಧಿತ ಬಾಕಿಗಳನ್ನು ಭರಿಸಲು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 3- ಶಿಕಾರಿಪುರದಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ
SHIKARIPURA: ಶಿಕಾರಿಪುರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಡಿ. 22 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ:9448289519.
ನ್ಯೂಸ್ 4- ಕಚ್ಚಾ ಸಾಮಗ್ರಿ ಹರಾಜು ಪ್ರಕ್ರಿಯೆ
SHIMOGA: ರಾಮನಗರ ಮತ್ತು ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಕಚ್ಚಾ ಸಾಮಗ್ರಿ ಹಾಗೂ ನಿರುಪಯುಕ್ತ ಸಣ್ಣ ಉಪಕರಣಗಳನ್ನು ಡಿ.22 ರ ಬೆಳಗ್ಗೆ 11 ಗಂಟೆಗೆ ಬಹಿರಂಗ ಹರಾಜಿನ ಮೂಲಕ ವಿಲೇವಾರಿಯನ್ನು ಮಾಡಲಾಗುತ್ತಿದೆ. ಆಸಕ್ತ ಸಂಸ್ಥೆಯವರು ಮುಂಗಡ ₹3000 ಗಳನ್ನು ಪಾವತಿಸಿ ನೋಂದಣಿ ಮಾಡಿ, ವಿಲೇವಾರಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9900569732 ಅಥವಾ ರಾಮನಗರ, ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಪ್ರಾಚಾರ್ಯರ ಕಚೇರಿ ಇವರನ್ನು ಸಂಪರ್ಕಿಸಬಹುದೆಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆಡಳಿತಾಧಿಖಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 5- ಅವಧಿ ವಿಸ್ತರಣೆ
SHIMOGA: ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮವು 2023-24ನೇ ಸಾಲಿಗೆ ಅರ್ಹ ಹಿಂದುಳಿದ ವರ್ಗಗಳ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿ. 25 ರವರೆಗೆ ವಿಸ್ತರಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನ್ಯೂಸ್ 6- ಡಾಕ್ ಅದಾಲತ್
SHIMOGA: ಶಿವಮೊಗ್ಗ ಅಂಚೆ ವಿಭಾಗದ ತ್ರೈಮಾಸಿಕ ‘ಡಾಕ್ ಅದಾಲತ್’ ಕಾರ್ಯಕ್ರಮವನ್ನು ಡಿ.22 ರಂದು ಮಧ್ಯಾಹ್ನ 3 ಗಂಟೆಗೆ ಕೋಟೆ ರಸ್ತೆಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಅಂಚೆ ಇಲಾಖೆಯ ಕುಂದುಕೊರತೆಗಳನ್ನು ಅಥವಾ ಸಲಹೆಗಳನ್ನು ಮೇಲ್ಕಂಡ ವಿಳಾಸಕ್ಕೆ ಡಿ.19 ರೊಳಗೆ ಅವುಗಳ ನಿವಾರಣೆಗೆ ಕಳುಹಿಸಬಹುದು ಹಾಗೂ ಡಾಕ್ ಅದಾಲತ್ ನಲ್ಲಿ ಭಾಗವಹಿಸಬಹುದು ಎಂದು ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
Good News | ಮಧ್ಯ ಕರ್ನಾಟಕದ ಮೊದಲ ಹ್ಯೂಮನ್ ಮಿಲ್ಕ್ ಬ್ಯಾಂಕ್ ಶಿವಮೊಗ್ಗದಲ್ಲಿ ಆರಂಭ, ಏನೇನು ವಿಶೇಷ?