ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆಗೆ ಬಂದ ದೂರಿನನ್ವಯ ಶನಿವಾರ ವಿವಿಧ ಬಡಾವಣೆಗಳಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಯಿತು. ಹತ್ತು ಜನ ಪೊಲೀಸರ ಬೆಂಗಾವಲಿನಲ್ಲಿ ಹಂದಿಗಳನ್ನು ಹಿಡಿದು ಬೆಂಗಳೂರಿಗೆ ಸಾಗಿಸಲಾಯಿತು.
ಬೆಂಗಳೂರಿAದ ಬಂದಿದ್ದ 15 ಜನರ ತಂಡ ಕಾರ್ಯಾಚರಣೆ ನಡೆಸಿ, 120-130 ಹಂದಿಗಳನ್ನು ಹಿಡಿದರು.
* ಎಲ್ಲೆಲ್ಲಿ ಕಾರ್ಯಾಚರಣೆ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹರಿಗೆ, ಎಂ.ಆರ್.ಎಸ್ ಕ್ವಾರ್ಟರ್ಸ್, ಕೋಟೆ ಪೊಲೀಸ್ ಠಾಣೆ, ಅಣ್ಣಾನಗರ, ರಂಗನಾಥ ಬಡಾವಣೆ, ಗೋಪಾಳ, ಅನಪಿನಕಟ್ಟೆ ರಸ್ತೆ, ವೆಂಕಟೇಶ ನಗರದಲ್ಲಿ ಹಂದಿಗಳನ್ನು ಹಿಡಿಯಲಾಯಿತು.
ಫೋಟೊ: ಪಿಗ್