ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಏಕವ್ಯಕ್ತಿ ರಂಗ ಪ್ರದರ್ಶನದ ಮೂಲಕ ‘ಲಕ್ಕಿ ಗುಪ್ತಾ’ (Lucky Gupta ) ನಟನೆಯು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಶಿವಮೊಗ್ಗ ನಗರದಲ್ಲಿ (shimoga) ಮಂಗಳವಾರದಂದೇ ಹಲವೆಡೆ “‘ಮಾ ಮುಝೆ ಟ್ಯಾಗೋರ್ ಬನಾದೆ” ನಾಟಕ ಪ್ರದರ್ಶನ ಕಂಡಿತು.
READ | ವಿದ್ಯಾರ್ಥಿಯನ್ನು ಬಲಿ ಪಡೆದ, ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ‘ಅಭಿಮನ್ಯು’ಗೆ ರಿಲೀಸ್!
ದೇಶಾದ್ಯಂತ ಸುಮಾರು 800 ನಗರಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಏಕವ್ಯಕ್ತಿ ರಂಗಪ್ರಯೋಗವಾದ ‘ಮಾ ಮುಝೆ ಟ್ಯಾಗೋರ್ ಬನಾದೆ’ (maa mujhe tagore bana de drama) ನಾಟಕವು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪ್ರದರ್ಶಿಸಲಾಯಿತು.
ನಾಟಕ ಪ್ರದರ್ಶನ ನೀಡಿದ ಲಕ್ಕಿ ಗುಪ್ತ ಅವರು ಜಮ್ಮು ಮತ್ತು ಕಾಶ್ಮೀರ ಮೂಲದವರಾಗಿದ್ದು, ಪ್ರವಾಸಿ ರಂಗ ಕಲಾವಿದರು. ಕಳೆದ 25 ವರ್ಷಗಳಿಂದ ದೇಶಾದ್ಯಂತ ಏಕವ್ಯಕ್ತಿ ರಂಗ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಪ್ರೇಕ್ಷಕರನ್ನೇ ನಟರನ್ನಾಗಿ ಪರಿವರ್ತಿಸಿ ಅವರೊಂದಿಗೆ ಮಾತನಾಡುತ್ತಾ ಕಾಲೇಜಿನ ಸಮಸ್ಯೆಗಳು, ಶಿಕ್ಷಕರ ಪರಿಸ್ಥಿತಿ, ಹುಡುಗರ ಮನೋಭಾವ ಈ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಅಭಿನಯದ ಮೂಲಕ ತೋರಿಸಿದರು. ಮನೋಜ್ಞ ನಟನೆಗೆ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಹುರಿದುಂಬಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ, ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗ, ಕಲಾ ತಂಡ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಏಕವ್ಯಕ್ತಿ ರಂಗಪ್ರಯೋಗವನ್ನು ಸಂಘದ ಉಪಾಧ್ಯಕ್ಷ ಆರ್.ಎಸ್. ಹಾಲಸ್ವಾಮಿ ಉದ್ಘಾಟಿಸಿದರು. ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಕೆ.ಎನ್. ಮಂಜುನಾಥ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹಾಲಮ್ಮ, ಸಹ ಪ್ರಾಧ್ಯಾಪಕ ಡಾ. ಮರ್ಗನಳ್ಳಿ ಪ್ರಕಾಶ್, ಡಾ. ಮೋಹನ್ ಚಂದ್ರಗುತ್ತಿ, ಸಹ್ಯಾದ್ರಿ ಕಲಾ ತಂಡದ ಸಂಚಾಲಕ ಜಿ.ಆರ್. ಲವ, ನಿವೃತ್ತ ಪ್ರಾಧ್ಯಾಪಕ ಕೆ.ಜಿ. ವೆಂಕಟೇಶ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್.ರವಿಕುಮಾರ್, ಜಿಲ್ಲಾ ಸಂಘದ ಉಪಾಧ್ಯಕ್ಷ ವೈದ್ಯ ಮೊದಲಾದವರಿದ್ದರು.]
Police Firing | ಶಿವಮೊಗ್ಗದಲ್ಲಿ ಮತ್ತೆ ಪೊಲೀಸರ ಪಿಸ್ತೂಲ್ ಸದ್ದು, ಆರೋಪಿಯ ಕಾಲಿಗೆ ಬಿತ್ತು ಗುಂಡು