ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ವರ್ಗಾವಣೆ ಪರ್ವ ಮುಂದುವರಿದಿದೆ. ಸರ್ಕಾರವು 211 ಪೊಲೀಸ್ ಇನ್ಸ್’ಪೆಕ್ಟರ್‘ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ಹಲವರು ವರ್ಗಾವಣೆಗೊಂಡಿದ್ದು, ವಿವರ ಇಲ್ಲಿದೆ.
READ | ಶಿವಮೊಗ್ಗದ ಹೋಮ್ ಸ್ಡೇಗಳಿಗೆ ಮಹತ್ವದ ಸೂಚನೆ, ತಪ್ಪಿದ್ದಲ್ಲಿ ನೋಂದಣಿಯೇ ರದ್ದು
ಶಿವಮೊಗ್ಗದಿಂದ ಯಾರೆಲ್ಲ ವರ್ಗಾವಣೆ?
- ಶಿಕಾರಿಪುರ ಗ್ರಾಮಾಂತರ ಠಾಣೆಯಿಂದ ಜೆ.ಲಕ್ಷ್ಮಣ್ ಅವರನ್ನು ಬೆಂಗಳೂರಿನ ನಂದಿನಿ ಲೇಔಟ್’ಗೆ ವರ್ಗಾವಣೆ ಮಾಡಲಾಗಿದೆ.
- ತೀರ್ಥಹಳ್ಳಿ ಪೊಲೀಸ್ ಠಾಣೆಯಿಂದ ಜೆ.ಅಶ್ವಥಗೌಡ ಅವರನ್ನು ಬೆಂಗಳೂರಿನ ಜ್ಞಾನಭಾರತಿ ಠಾಣೆಗೆ ವರ್ಗಾಯಿಸಲಾಗಿದೆ.
- ತೀರ್ಥಹಳ್ಳಿಯ ಮಾಳೂರು ಠಾಣೆಯಿಂದ ಪ್ರವೀಣ್ ಜಿ. ನೀಲಮ್ಮನವರ್ ಅವರನ್ನು ಹುಬ್ಬಳ್ಳಿ ಧಾರವಾಡ ಗೋಕುಲ್ ರೋಡ್ ಠಾಣೆಗೆ ವರ್ಗ.
- ಭದ್ರಾವತಿ ನಗರ ವೃತ್ತದಿಂದ ರಾಘವೇಂದ್ರ ಕಾಂಡಿಕೆ ಅವರನ್ನು ಚಿತ್ರದುರ್ಗದ ಹಿರಿಯೂರು ಠಾಣೆಗೆ ವರ್ಗಾಯಿಸಲಾಗಿದೆ.
- ವಿನೋಬನಗರ ಪೊಲೀಸ್ ಠಾಣೆಯಿಂದ ಎನ್.ಎಸ್.ರವಿ ಅವರನ್ನು ದಾವಣಗೆರೆ ಜಿಲ್ಲೆ ನ್ಯಾಮಿತ ಠಾಣೆಗೆ ವರ್ಗ
- ಹೊಸನಗರ ಪೊಲೀಸ್ ಠಾಣೆಯಿಂದ ಬಿ.ಸಿ.ಗಿರೀಶ್ ಅವರನ್ನು ಪಾವಗಡ ಗ್ರಾಮಾಂತರ ಠಾಣೆಗೆ ವರ್ಗ.
- ಸಾಗರ ಗ್ರಾಮಾಂತರ ಠಾಣೆಯಿಂದ ವಿ.ಪ್ರವೀಣ್ ಕುಮಾರ್ ಹಾವೇರಿ ಜಿಲ್ಲೆ ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.
- ರಾಜ್ಯ ಗುಪ್ತವಾರ್ತೆಯಿಂದ ಶ್ರೀಶೈಲಕುಮಾರ್ ಅವರನ್ನು ಭದ್ರಾವತಿ ನಗರ ವೃತ್ತಕ್ಕೆ ವರ್ಗಾಯಿಸಲಾಗಿದೆ.
- ಭಟ್ಕಳ ಗ್ರಾಮಾಂತರ ಠಾಣೆಯಿಂದ ಮಹಾಬಲೇಶ್ವರ್ ಎಸ್.ನಾಯಕ್ ಅವರನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗ.
- ಹಾವೇರಿ ಜಿಲ್ಲೆ ಹಿರೇಕೆರೂರು ಠಾಣೆಯಿಂದ ರುದ್ರೇಗೌಡ ರೇವಣಗೌಡ ಪಾಟೀಲ್ ಅವರನ್ನು ಶಿವಮೊಗ್ಗದ ವಿನೋಬನಗರ ಠಾಣೆಗೆ ವರ್ಗ
- ಭಾಲ್ಕಿ ನಗರ ಠಾಣೆಯಿಂದ ಗುರಣ್ಣ ಎಸ್.ಹೆಬ್ಬಾಳ್ ಅವರನ್ನು ಹೊಸನಗರ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.