ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಆತಂಕ ಮುಂದುವರಿದಿದ್ದು, ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ಕೇಂದ್ರ ಸರ್ಕಾರದ ನಿರ್ದೇಶನ ನೀಡಿದ ಬಳಿಕ ಜಿಲ್ಲಾಡಳಿತ ಗ್ರಾಮೀಣ ಪ್ರದೇಶಗಳ ಕಡೆಗೆ ಹೆಚ್ಚು ಒತ್ತು ನೀಡುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಅಂಕಿ ಅಂಶ ಸರಳವಾಗಲಿ ಎಂಬ ಕಾರಣಕ್ಕೆ ಪಂಚಾಯಿತಿಗಳನ್ನು ವಲಯªರು ವಿಂಗಡಿಸಲಾಗಿದೆ.
https://www.suddikanaja.com/2021/05/26/cm-yadiyurappa-instruction-to-thirthahalli/
ಜಿಲ್ಲೆಯಲ್ಲಿ ಪ್ರಸ್ತುತ 63 ಪಂಚಾಯಿತಿಗಳನ್ನು ಕೆಂಪು ವಲಯಗಳಲ್ಲಿ ಗುರುತಿಸಲಾಗಿದೆ. ಇವುಗಳನ್ನು ಬರುವ ಒಂದು ವಾರದಲ್ಲಿ ಹಸಿರು ವಲಯಕ್ಕೆ ತರುವುದೇ ಸದ್ಯದ ಟಾರ್ಗೆಟ್ ಆಗಿದೆ. ಅದಕ್ಕೆ ಪೂರಕವಾಗಿ ಲಾಕ್ ಡೌನ್ ಇತ್ಯಾದಿಗಳನ್ನು ಹೇರುವ ಮೂಲಕ ಸೋಂಕಿಗೆ ತಡೆಯೊಡ್ಡುವ ಕೆಲಸ ಮಾಡಲಾಗುತ್ತಿದೆ.
ಜೋನ್ ನಿರ್ಧಾರ ಹೇಗೆ | ಕೊರೊನಾ ಸೋಕಿತರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕೆಂಪು, ಹಳದಿ, ಹಸಿರು ಮತ್ತು ಕಡು ಹಸಿರು ಜೋನ್ ಎಂದು ಗುರುತಿಸಲಾಗಿದೆ. 21ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದಲ್ಲಿ ಅದನ್ನು ರೆಡ್, 11-20 ನಡುವೆ ಇದ್ದರೆ ಹಳದಿ, 1-10 ನಡುವೆ ಹಸಿರು ಹಾಗೂ ಶೂನ್ಯ ಇರುವ ಪಂಚಾಯಿತಿಗಳನ್ನು ಕಡು ಹಸಿರು ಎಂದು ನಿರ್ಧರಿಸಲಾಗಿದೆ.
ಪ್ರಸ್ತುತ ಕೆಂಪು ವಲಯದಲ್ಲಿ 63, ಹಳದಿ 96, ಹಸಿರು 103, ಕಡು ಹಸಿರು 2 ಪಂಚಾಯಿತಿಗಳು ಇವೆ.
https://www.suddikanaja.com/2021/01/14/covid-vaccine-arrive-shivamogga-on-friday-morning/