ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಸೋಮವಾರ ಬೆಳಗ್ಗೆಯಿಂದ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿ ಆದೇಶಿಸಿದೆ.
ಪರಿಷ್ಕೃತ ಆದೇಶ ಅನುಷ್ಠಾನಗೊಳ್ಳುವಲ್ಲಿ ಇನ್ನೂ ನಾಳೆ ಒಂದು ದಿನ ಬಾಕಿ ಇರುವಾಗಲೇ ಅಗತ್ಯ ವಸ್ತುಗಳ ಖರೀದಿಗೆ ಜನ ಅಂಗಡಿಗಳಿಗೆ ಧಾವಿಸಿದರು.
ದಿನಸಿ, ತರಕಾರಿ, ಹಣ್ಣು, ಹೂವು ಖರೀದಿಗೆ ಜನ ಮಾರುಕಟ್ಟೆಗೆ ಆಗಮಿಸಿದರು. ಇದರಿಂದಾಗಿ, ಹಲವು ಸೂಪರ್ ಮಾರ್ಕೆಟ್ ಗಳಲ್ಲಿ ಸರದಿ ಇತ್ತು. ಮಧ್ಯಾಹ್ನ 12 ಗಂಟೆಯವರೆಗೆ ಖರೀದಿಗೆ ಕಾಲಾವಕಾಶ ನೀಡಿದ್ದು, 1 ಗಂಟೆಯಾದರೂ ಜನರ ಓಡಾಟವೇನೂ ಕಡಿಮೆ ಆಗಿರಲಿಲ್ಲ.