ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೇ 10ರಿಂದ ಜಿಲ್ಲೆಯಲ್ಲಿ ಕಂಪ್ಲೀಟ್ ಲಾಕ್ ಡೌನ್ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
READ | ನಾಳೆ ಬೆಳಗ್ಗೆ ವಾಹನ ಸಂಚಾರ ನಿರ್ಬಂಧ, ರಿಲ್ಯಾಕ್ಸ್ ಅವಧಿಯಲ್ಲೂ ದ್ವಿಚಕ್ರ ಹೊರತೆಗೆಯುವಂತಿಲ್ಲ
ಈಗಾಗಲೇ ರಾಜ್ಯ ಸರ್ಕಾರ ನೀಡಿರುವ ಸೂಚನೆಯಂತೆ ರಿಲ್ಯಾಕ್ಸ್ ಅವಧಿಯಲ್ಲೂ ವಾಹನಗಳಲ್ಲಿ ಓಡಾಡುವಂತಿಲ್ಲ. ಹಾಗೊಮ್ಮೆ ಓಡಾಡುವುದು ಕಂಡುಬಂದರೆ ಪೊಲೀಸ್ ಇಲಾಖೆ ಮುಲಾಜಿಲ್ಲದೇ ಅಂತಹ ವಾಹನಗಳನ್ನು ಸೀಜ್ ಮಾಡಲಿದೆ.
ಈ ವೇಳೆ ವಶಕ್ಕೆ ಪಡೆದ ವಾಹನಗಳನ್ನು 14 ದಿನಗಳವರೆಗೆ ವಾಪಸ್ ನೀಡಲಾಗುವುದಿಲ್ಲ. ಅದನ್ನು ಕೋರ್ಟ್ ನಲ್ಲಿಯೇ ದಂಡ ಕಟ್ಟಿ ಬಿಡಿಸಿಕೊಳ್ಳಬೇಕು. ಇಂತಹ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಆಟೋ ರಿಕ್ಷಾ, ದ್ವಿಚಕ್ರ ವಾಹನದಲ್ಲಿ ಸಂಚರಿಸುವಂತಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಬರಬೇಕಾದರೆ ಅಂತಹವರು ನಡೆದುಕೊಂಡು ಬರಬಹುದು ಎಂದು ನಿರ್ದೇಶನ ನೀಡಲಾಗಿದೆ.