ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ಫೆ.8 ರಂದು ಶಿವಮೊಗ್ಗ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಅಂದು ಮಧ್ಯಾಹ್ನ 12.15 ಕ್ಕೆ ಬೆಂಗಳೂರಿನದ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು ಮಧ್ಯಾಹ್ನ 1.35 ಕ್ಕೆ ಶಿವಮೊಗ್ಗದ ಹೆಲಿಪ್ಯಾಡ್ ತಲುಪುವರು. ಮಧ್ಯಾಹ್ನ 1.45 ಕ್ಕೆ ಎನ್ಇಎಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ/ ಶಿಲಾನ್ಯಾಸ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 3.30 ಕ್ಕೆ ಸರ್ಕ್ಯೂಟ್ ಹೌಸ್ನಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಸಂಬಂಧಿಸಿದ ನಿಯೋಗದ ಭೇಟಿ ಮಾಡಿ, ಸಂಜೆ 4 ಗಂಟೆಗೆ ಸರ್ಕ್ಯೂಟ್ ಹೌಸ್ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಸಂಜೆ 5.20 ಕ್ಕೆ ಬೆಂಗಳೂರು ತಲುಪುವರು.
READ | ಸಾಗರ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ 19 ಷರತ್ತುಗಳು, ಆದೇಶದಲ್ಲಿ ಏನಿದೆ?
ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ
- ಬಸವರಾಜ್ ಬೊಮ್ಮಾಯಿ ಅವರು ಫೆ.8 ರಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದ ಸಹಯೋಗದೊಡನೆ ರಾಜ್ಯ ಸರ್ಕಾರದ ವಸತಿ ಯೋಜನೆಗಳ ಸಂಯೋಜನೆಯಡಿ ನಿರ್ಮಿಸುತ್ತಿರುವ 3000 ಜಿ+2 ಗುಂಪು ಮನೆಗಳಲ್ಲಿ ಪೂರ್ಣಗೊಂಡಿರುವ 288 ಮನೆಗಳ ಉದ್ಘಾಟನೆ ಮತ್ತು 700 ಫಲಾನುಭವಿಗಳಿಗೆ ಅಂತಿಮ ಹಂಚಿಕೆ ಪತ್ರ ವಿತರಣೆ ಮಾಡುವರು.
- ₹3.48 ಕೋಟಿ ಮೊತ್ತದ ಶಿವಮೊಗ್ಗ ನಗರದಲ್ಲಿ 2 ಕೆರೆಗಳ ಲೋಕಾರ್ಪಣೆ ಮತ್ತು ಉದ್ಯಾನವನಗಳಲ್ಲಿ ಅಳವಡಿಸಿರುವ ಹೊರಾಂಗಣ ಜಿಮ್ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದ 2ನೇ ಅಂತಸ್ತಿನ ಕಟ್ಟಡ, ₹25.30 ಕೋಟಿ ಮೊತ್ತದ ಶಿವಮೊಗ್ಗ ನಗರದ ಸಿಸಿ/ ಕಾಂಕ್ರಿಟ್ ರಸ್ತೆ ಅಭಿವೃದ್ದಿ ಕಾಮಗಾರಿ ಉದ್ಘಾಟನೆ
- ₹1.74 ಕೋಟಿ ಮೊತ್ತದ ಸ್ಮಾರ್ಟ್ ಎಜುಕೇಷನ್ ಪ್ರಾಜೆಕ್ಟ್(23 ಶಾಲೆಗಳ) ಫೇಸ್-2 ಉದ್ಘಾಟನೆ ನೆರವೇರಿಸುವರು.
- ₹58.00 ಕೋಟಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಮತ್ತು ಪುರಲೆ ಗ್ರಾಮದ ಹತ್ತಿರ 5.13 ಎಂಎಲ್ಡಿ ಸಾಮರ್ಥ್ಯದ ಎಸ್ಬಿಆರ್ ತಂತ್ರಜ್ಞಾನದ ಮಲಿನ ನೀರು ಶುದ್ದೀಕರಣ ಘಟಕ
- ₹7 ಕೋಟಿ ಅಮೃತ್ ಯೋಜನೆಯಡಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಮತ್ತು ಕೋಟೆ ರಸ್ತೆಯ ಬಿಸಿ ಲೇಡಿಸ್ ಹಾಸ್ಟೆಲ್ ಹತ್ತಿರ ಕಾಮಗಾರಿ ವೆಟ್-ವೆಲ್ಕಮ್ ಪಂಪು ಮನೆ
- ₹1.15 ಕೋಟಿ ವೆಚ್ಚದ ನಗರದ 3ನೇ ಹಂತದ ಸಮಗ್ರ ಒಳಚರಂಡಿ ಯೋಜನೆಯಡಿ ಆಟೋ ಕಾಂಪ್ಲೆಕ್ಸ್ ಹತ್ತಿರ ಮತ್ತು ಸೀಗೆಹಟ್ಟಿ ಹತ್ತಿರ ವೆಟ್-ವೆಲ್ ಕಮ್ ಪಂಪು ಮನೆ.
- ₹4.20 ಕೋಟಿ ವೆಚ್ಚದ ಕೇಂದ್ರ ಪುರಸ್ಕೃತ ಅಮೃತ್-1 ಯೋಜನೆಯಡಿ ಶಿವಮೊಗ್ಗ ನಗರದ ನೀರು ಸರಬರಾಜು ವ್ಯವಸ್ಥೆ, ಪಂಪಿಂಗ್ ಮೆಷನರಿ ಅಳವಡಿಕೆ ಮತ್ತು ಹಳೇ ಶಿಥಿಲಾವಸ್ಥೆಯಲ್ಲಿರುವ 2 ಸಂಖ್ಯೆ ಟ್ಯಾಂಕ್ ತೆರವುಗೊಳಿಸುವ ಕಾಮಗಾರಿ
- ₹2.92 ಕೋಟಿ ವೆಚ್ಚದ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿವಮೊಗ್ಗ 12 ಕೊಠಡಿ ಮತ್ತು 4 ಶೌಚಾಲಯ ಕಾಮಗಾರಿ
- ₹7 ಕೋಟಿ ಶಿವಮೊಗ್ಗ ನಗರ, ಮಹಾಗಣಪತಿ ಸೇವಾ ಪ್ರತಿಷ್ಟಾನ ದೇವಾಲಯದಲ್ಲಿ ಪ್ರವಾಸಿ ತಾಣದ ಅಭಿವೃದ್ದಿ, ದ್ವಾದಶ ಜ್ಯೋತಿರ್ಲಿಂಗ ಮತ್ತು ಬಯಲು ರಂಗ ಮಂದಿರ ನಿರ್ಮಾಣ ಕಾಮಗಾರಿ.
- ₹15.41 ಕೋಟಿ ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಮತ್ತು ಬೋಧನಾ ಆಸ್ಪತ್ರೆ, ಶಿವಮೊಗ್ಗ ಕಟ್ಟಡದ ಹೆಚ್ಚುವರಿ ಕಾಮಗಾರಿ ಹಾಗೂ ಇಲ್ಲಿನ ಮಹಿಳಾ ವಿದ್ಯಾರ್ಥಿಗಳ ವಸತಿ ನಿಲಯ ಕಾಮಗಾರಿ
- ₹2.11 ಕೋಟಿ ಆರ್ಎಡಿಎಫ್-24 ಯೋಜನೆಯಡಿ ಮಂಜೂರಾಗಿರುವ ಪಶುಪಾಲನಾ ಇಲಾಖೆಯ ಕುವೆಂಪು ಬಡಾವಣೆಯಲ್ಲಿ ಪಾಲಿಕ್ಲಿನಿಕ್ ನೂತನ ಕಟ್ಟಡ ನಿರ್ಮಾಣ ಕಾಮಗಾರಿ.
- ₹65 ಲಕ್ಷದ ನಗರದ ವಾರ್ಡ್ ನಂ 12, 17, 23, 24 ರಲ್ಲಿ ಉದ್ಘಾಟನೆಗೆ ಸಿದ್ದವಿರುವ ಅಂಗನವಾಡಿ ಕಟ್ಟಡಗಳು. ₹4.05 ಕೋಟಿಯ ಶಿವಮೊಗ್ಗ ನಗರದ ವಿವಿಧ ಭಾಗದಲ್ಲಿ ನಿರ್ಮಿಸಿದ ಸಮುದಾಯ ಭವನಗಳು. ₹75 ಲಕ್ಷದ ಅಂಗನವಾಡಿ ಕಟ್ಟಡಗಳು, ₹50 ಲಕ್ಷದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಲಸಿಕಾ ಉಗ್ರಾಣ ಕೇಂದ್ರದ ಕಟ್ಟಡ. ₹3.50 ಕೋಟಿ ವೆಚ್ಚದ ಶಿವಮೊಗ್ಗ ನಗರದ ಊರುಗಡೂರಿನಲ್ಲಿ ನಿರ್ಮಿಸಿರುವ ಜಿಲ್ಲಾ ವಾಲ್ಮೀಕಿ ಭವನದ ಕಾಮಗಾರಿ.
- ಅಂದಾಜು ₹21.60 ಕೋಟಿ ವೆಚ್ಚದ ಶಿವಮೊಗ್ಗ ನಗರದಲ್ಲಿನ ಅಂಗನವಾಡಿ ಕಟ್ಟಡ/ ಸರ್ಕಾರಿ ಶಾಲೆಯ ಅಭಿವೃದ್ಧಿ/ ಸ್ಮಶಾನ ಕಾಂಪೌಂಡ್/ ರಸ್ತೆ ಮತ್ತು ಬಾಕ್ಸ್ ಚರಂಡಿ/ ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ.
- ₹645.92 ಲಕ್ಷ ವೆಚ್ಚದ ಶಿವಮೊಗ್ಗ ನಗರದಲ್ಲಿನ ವಿವಿಧ ವಾರ್ಡ್ ಗಳಲ್ಲಿ ರಸ್ತೆ, ಚರಂಡಿ ಮತ್ತು ಪಾರ್ಕ್ ಅಭಿವೃದ್ಧಿ ಕಾಮಗಾರಿ.
- ₹1.07 ಕೋಟಿ ವೆಚ್ಚದ ಶಿವಮೊಗ್ಗ ನಗರ ವಸತಿ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ಧಿ ಮತ್ತು ವ್ಯಾಯಾಮ ಸಾಮಾಗ್ರಿ ಅಳವಡಿಸುವ ಕಾಮಗಾರಿ.
- ₹19.50 ಕೋಟಿ ವೆಚ್ಚದ ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿ, ವಿದ್ಯಾರ್ಥಿ ನಿಲಯ ನಿರ್ಮಾಣ.
- ₹15.15 ಕೋಟಿ ವೆಚ್ಚದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಅನ್ವಯ ಶಿವಮೊಗ್ಗ ನಗರದ ತುಂಗಾ ನದಿಗೆ ಸೇರುತ್ತಿರುವ ಮಲಿನ ನೀರನ್ನು ಪ್ರತಿಬಂಧಿಸುವುದು ಮತ್ತು ತಿರುಗಿಸುವ ಕಾಮಗಾರಿ.
- ₹1 ಕೋಟಿ ವೆಚ್ಚದ ಶಿವಮೊಗ್ಗ ನಗರದ ವಾರ್ಡ್ ನಂ: 06,08,12,27,30 ರಲ್ಲಿ ಅಂಗನವಾಡಿ ಕಟ್ಟಡ ಶಂಕು ಸ್ಥಾಪನೆ. ₹780.5 ಲಕ್ಷ ವೆಚ್ಚದ ಶಿವಮೊಗ್ಗ ನಗರ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣ. ₹785 ಲಕ್ಷ ವೆಚ್ಚದ ಬಯಲು ರಂಗಮಂದಿರ, ಸಮುದಾಯ ಭವನ, ಸಭಾ ಭವನ, ಸ್ಪೋರ್ಟ್ಸ್ ಕ್ಲಬ್ ನಿರ್ಮಾಣ ಕಾಮಗಾರಿ.
- ₹326.32 ಲಕ್ಷ ವೆಚ್ಚದ ಇಂದಿರಾಗಾಂಧಿ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯದ ಸ್ವಂತ ಕಟ್ಟಡದ ಶಂಕುಸ್ಥಾಪನಾ ಸಮಾರಂಭ, ಸಾನ್ವಿ ಬಡಾವಣೆ, ಬೊಮ್ಮನಕಟ್ಟೆ, ಶಿವಮೊಗ್ಗ ಅಂದಾಜು. ₹1.50 ಕೋಟಿ ವೆಚ್ಚದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ರಿಜಿನಲ್ ಲಸಿಕಾ ಉಗ್ರಾಣ ಕೇಂದ್ರದ ಕಟ್ಟಡ ನಿರ್ಮಾಣ. ₹1062.50 ಲಕ್ಷ ವೆಚ್ಚದ ಶಿವಮೊಗ್ಗ ನಗರದ ವಿವಿಧ ವಾರ್ಡ್ಗಳಲ್ಲಿ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ.
- ತುಂಗಾನಗರ 100 ಅಡಿ ರಸ್ತೆಗೆ ಮತ್ತು ತುಂಗಾ ಚಾನಲ್ ಸರ್ಕಲ್ಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ. ಗಾಂಧಿ ಬಸಪ್ಪ ಇವರ ಹೆಸರು ನಾಮಕರಣ ಮಾಡುವ ಕಾರ್ಯಕ್ರಗಳಲ್ಲಿ ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಿಗಳ ಅಧ್ಯಕ್ಷರು, ಮಹಾನಗರಪಾಲಿಕೆ ಮಹಾಪೌರರು, ಉಪ ಮಹಾಪೌರರು, ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.