ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡು ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಗಾಜನೂರು ಜಲಾಶಯದ ಎರಡು ಕ್ರಸ್ಟ್ ಗೇಟ್’ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ.
READ | ತಾಳಗುಪ್ಪ-ಶಿವಮೊಗ್ಗ ರೈಲು ರದ್ದು, ರಾಜ್ಯದ ಹಲವು ರೈಲುಗಳ ಸಮಯದಲ್ಲಿ ಬದಲಾವಣೆ, ಕಾರಣವೇನು?
ಅಣೆಕಟ್ಟಿನಿಂದ ನದಿಗೆ 6,394 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು, ಒಳಹರಿವು ಕೂಡ ಅಷ್ಟೇ ಇದೆ. ಒಂದುವೇಳೆ, ಒಳಹರಿವು ಇನ್ನಷ್ಟು ಹೆಚ್ಚಳವಾದರೆ, ಹೊರಹರಿವಿನ ಪ್ರಮಾಣದಲ್ಲೂ ಹೆಚ್ಚಿಸಲಾಗುವುದು. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಗೇಟ್’ಗಳನ್ನು ತೆರೆಯಲಾಗಿದೆ.
ತುಂಗಾ ಹೊಳೆಗೆ ಜೀವಕಳೆ
ಮಳೆ ಕೊರತೆಯಿಂದಾಗಿ ತುಂಗಾ ಹೊಳೆ ಸಂಪೂರ್ಣ ಬತ್ತಿ ಹೋಗಿತ್ತು. ಡ್ಯಾಂನಿಂದ ನೀರು ಹೊರಬಿಟ್ಟಿರುವುದರಿಂದ ತುಂಗಾ ನದಿಗೆ ಮತ್ತೆ ಜೀವಕಳೆ ಬಂದಿದೆ. ಜನರು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹೊಳೆಯ ಹತ್ತಿರ ಆಗಮಿಸುತ್ತಿದ್ದಾರೆ.
ಗಾಜನೂರು ಜಲಾಶಯದ ಗರಿಷ್ಠ ಮಟ್ಟ 588.24 ಅಡಿಯಿದ್ದು, ಇಂದಿನ ಮಟ್ಟ 587.54 ಅಡಿ ಇದೆ. ನಿನ್ನೆ ರಾತ್ರಿ ಒಳಹರಿವಿನ ಪ್ರಮಾಣವು 12082 ಕ್ಯೂಸೆಕ್ಸ್’ಗೆ ಏರಿಕೆಯಾಗಿತ್ತು. ನಂತರ ಗೇಟ್ ಗಳನ್ನು ತೆರೆಯಲಾಯಿತು.
Rain in shimoga | ಆಗುಂಬೆ, ಶರಾವತಿ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ, ಎಲ್ಲಿ ಹೇಗಿದೆ ಸ್ಥಿತಿ?